Posted on Jan 18, 2013 in 2013, ale3 | 0 comments

ಸಹೃದಯ ಓದುಗರೆ,

ಜನವರಿ ೨೬, ೨೦೧೩ ರಿಂದ ಪ್ರಾರಂಭಗೊಂಡು ಇದುವರೆಗೂ, ೧೩ ‘ಅರಿವಿನ ಅಲೆ’ಗಳನ್ನು ಹಲವು ಬರಹಗಾರರಿಂದ ಪಡೆದು, ಪರಿಷ್ಕರಿಸಿ ನಿಮ್ಮ ಮುಂದೆ ಇಟ್ಟಿರುತ್ತೇವೆ. ಇವುಗಳನ್ನು ಓದಿದ ಮೇಲೆ ತಮಗೆ ಲೋಪದೋಷಗಳೇನಾದರೂ ಕಂಡುಬಂದಲ್ಲಿ, ದಯವಿಟ್ಟು ಆಯಾ ಅಲೆಗಳ ಅಡಿಯಲ್ಲಿ ತಪ್ಪದೇ ಪ್ರತಿಕ್ರಿಯಿಸಿ. ಅನಿಲ್ ರಮೇಶ್ ಅವರ ‘ಪಕ್ಷಿ ವೀಕ್ಷಣೆ’ ಬರಹದಿಂದ ಪ್ರಾರಂಭವಾದ ಈ ಸಂಚಿಕೆಯು, ಮುರಳಿ ಎಚ್. ಆರ್. ಅವರ ‘ಕರ್ನಾಟಕ ಸೈಕಲ್ ರಿಪಬ್ಲಿಕ್’ ಎಂಬ ಸರಣಿಯೊಂದಿಗೆ ಮುಕ್ತಾಯಗೊಳ್ಳುತ್ತಿದೆ. ಈ ಸಂಚಿಕೆಯ E-book ಪ್ರತಿಯನ್ನು ಸದ್ಯದಲ್ಲಿಯೇ ತಯಾರಿಸಿ, ಸಂಚಯ ತಾಣದಲ್ಲಿಯೇ ಪ್ರಕಟಿಸಲಾಗುತ್ತದೆ. ದಯವಿಟ್ಟು ನಿರೀಕ್ಷಿಸಿ.

ಸಂಚಯದ ‘೨೦೧೩ ಗಣರಾಜ್ಯೋತ್ಸವ’ ಸಂಚಿಕೆಯನ್ನು ತಮ್ಮ ಬರಹಗಳ ಮೂಲಕ ಯಶಸ್ವಿಗೊಳಿಸಿದ ಸಮಸ್ತ ಬರಹಗಾರರಿಗೂ, ಸಂಚಯ ತಂಡ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ ಹಾಗೆಯೇ, ಮುಂಬರುವ ಸಂಚಿಕೆಗಳಲ್ಲಿಯೂ ಸಹ ತಮ್ಮ ಮತ್ತಷ್ಟು ಬರಹಗಳು ಎಲ್ಲರಿಗೂ ಸಿಗಲಿ ಎಂದು ಆಶಿಸುತ್ತದೆ. ಓದುಗ ವೃಂದವೂ ಸಹ ಮುಂದಿನ ಸಂಚಿಕೆಯಲ್ಲಿ ತಮ್ಮ ಬರಹವನ್ನು ನೀಡಿ, ಓದುಗರ ಜೊತೆ ಬರಹಗಾರರೂ ಆಗುತ್ತೀರೆಂದು ನಂಬಿರುತ್ತೇವೆ.

ಇಂತಿ, ಸಂಚಯ ತಂಡ